ಕೇರಳ ಚರಿತ್ರೆ
ಇಂದಿನ ಕೇರಳ ಸಂಸ್ಥಾನವು ರೂಪುಗೊಂಡದ್ದು 1956 ರಲ್ಲಿ. ಇದಕ್ಕೂ ಮುಂಚೆ
ಕೇರಳವು ನೆಲೆನಿಂತದ್ದು ಮಲಬಾರ್, ಕೊಚ್ಚಿ, ತಿರುವಿದಾಂಕೂರ್ ಎಂಬ ಈ ಮೂರು ಪ್ರತ್ಯೇಕವಾದ ರಾಜಕೀಯ
ಘಟಕಗಳಾಗಿ. ಮಲಯಾಳ ಭಾಷೆಯ ಆಧಾರದಲ್ಲಿ ಮಲಬಾರಿನಲ್ಲೂ ಕೊಚ್ಚಿಯಲ್ಲೂ, ತಿರುವಿದಾಂಕೂರಿನಲ್ಲೂ
ಜನಗಳ ಮಧ್ಯೆ ರಾಜಕೀಯ ಘಟಕಗಳಿಗೆ ವ್ಯತಿರಿಕ್ತವಾದ ಹೇಗೆಂದು ನಿರೂಪಿಸಲಸಾಧ್ಯವಾದ ಒಂದು
ಐಕ್ಯವಿತ್ತು. ಕೇರಳದಲ್ಲಿ ವಸಹಾತುಶಾಹಿಯ ಕಾಲದಲ್ಲಿ ಈ ಐಕ್ಯ ಭಾವನೆಯು ಇನ್ನೂ ಹೆಚ್ಚಾಗಿ ಬೆಳೆದು
ನಿಂತಿತು. ಈ ಆಧಾರದಿಂದ ಆಧುನಿಕ ಕೇರಳದ ಚರಿತ್ರೆಯು, ಮತ್ತು ಚರಿತ್ರ ರಚನಾ ಶಾಸ್ತ್ರವೂ ವಾಸ್ತವವಾಗಿ
ಆರಂಭವಾದದ್ದು ಕೇರಳ ಸಂಸ್ಥಾನ ರೂಪುಗೊಂಡಾಗಿನಿಂದ
ಎಂದು ಹೇಳಬಹುದು. ಎಂದರೆ ಮಲಯಾಳ ಮಾತನಾಡುವ ಜನರ ಚರಿತ್ರೆಯು ಅದಕ್ಕಿಂತ ನೂರಾರು ಶತಮಾದಷ್ಟು
ಮುಂಚೆಯೇ ಆರಂಭಗೊಂಡಿತ್ತು. ಆದ್ದರಿಂದ ಕೇರಳ ಚರಿತ್ರೆಯ ಮತ್ತು ಚರಿತ್ರರಚನಾ ಶಾಸ್ತ್ರದ ಬೇರುಗಳು
ಭೂತಕಾಲಕ್ಕೆ ಹರಡಿಕೊಂಡಿವೆ.
ಕೇರಳದ ಸಮಗ್ರವಾದ ಚರಿತ್ರೆಯು ರಚನೆಯಾಗಲು ಅರಂಭವಾಗುವುದಕ್ಕೂ
ಮುಂಚೆ ಮಲಬಾರಿನ, ಮತ್ತು ಕೊಚ್ಚಿಯ ಮತ್ತು
ತಿರುವಿದಾಂಕೂರಿನ ಪ್ರಾದೇಶಿಕವಾದ ಇತಿಹಾಸ ನಿರ್ಮಾಣವು ಹತ್ತೊಂಬತ್ತನೇ ಶತಮಾನದ ಕಡೆಯ
ದಶಕಗಳಲ್ಲಿಯೇ ಆರಂಭವಾಗಿತ್ತು. ಈ ರೀತಿಯ ಇತಿಹಾಸ
ರಚಗಳಲ್ಲಿ ಹಲವು ಅಂದು ನೆಲೆಯಲಿದ್ದ ಭೂಗೋಳಶಾಸ್ತ್ರ ಪರವಾದ ಮತ್ತು ರಾಜಕೀಯ ಪರವಾದ ಮಿತಿಗಳನ್ನು
ಮೀರುವಂತಹವುಗಳಾಗಿವೆ. ಒಂದು ಪರಿಧಿಯವರಗೆ ಈ ರಚನೆಗಳನ್ನು ಹತ್ತೊಂಬತ್ತನೇ ಶತಮಾನದಲ್ಲಿ
ಯುರೋಪಿಯನ್ ಚರಿತ್ರ ರಚನಾ ಶಾಸ್ತ್ರ ಪದ್ಧತಿಯಲ್ಲಿ ಉಂಟಾದ ಬದಲಾವಣೆಗಳ ಭಾಗವಾಗಿ, ಮುನ್ನಡೆದ ಪರಿಶ್ರಮಗಳ
ಫಲವಾಗಿ ಗಣನೆಗೆ ತೆಗೆದುಕೊಳ್ಳಬಹುದು.